ಶ್ರೀ ಶನೀಶ್ವರ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನಿಂದ ಮೂಡು ದಿಕ್ಕಿಗೆ ಸಾಗುವ ಒಂದು ಅಗಲ ಕಿರಿದಾದ ರಸ್ತೆಯಲ್ಲಿ 4-5 K.m. ಹಾಗೆ ಕಾಲ್ನಡಿಗೆಯಲ್ಲಿ ಅಥವಾ, ವಾಹನಗಳಲ್ಲಿ ನೇರ ಸಾಗುತ್ತಾ ಹೋದರೆ ಕಾಣ ಸಿಗುವ, ಈ ನಿಡಿದಾದ ಕಾಡು-ಮೇಡಿನಂತಿರುವ ಬಿಳಲುಗಳ ನಡುವೆ ಅಡಿಯನ್ನಿಟ್ಟ ಕೂಡಲೇ, ಕೂಗಳತೆಯ ದೂರದಲ್ಲಿ ಪುಟ್ಟದೊಂದು ಗುಡಿ ಚಿಗುರೊಡೆದು, ದಿವ್ಯ ಭವ್ಯವಾಗಿ ಸತ್ಯಧರ್ಮಗಳ ತವರೂರಾಗಿ ಕಣ್ಮನ ಸೆಳೆಯುವುದು ಆ ವಿಶಾಲವಾದ ಒಂದು ಆರಾಧನಾ ಸ್ಥಳವಿದುವೇ, ಕೂಡ್ಲು ಬಾಡಬೆಟ್ಟು ಶ್ರೀ ಶನೀಶ್ವರ ಸ್ವಾಮಿಯ ಕ್ಷೇತ್ರ. ಇಲ್ಲಿ ಬರುವಾಗ, ಮೊದಲಾಗಿ ಕಾಣಸಿಗುವ ಸ್ಥಳವೇ ಸ್ವಾಮಿದೇವರ ಕೂಡ್ಲು .ಇಲ್ಲಿಯೇ, ಈ ಶನೀಶ್ವರ ಸ್ವಾಮಿ ದೇವರ ನೆಲೆ!

